ಬಿನ್ನಾಣಗಿತ್ತಿ

ಬಿನ್ನಾಣಗಿತ್ತಿ ಈ ಮೋಡಗಾತಿ
ಚಂದ್ರನ ಮರೆಮಾಡಿ
ಎನ್ನ ಮನಸನು ಕದಡಿದಳು ||

ದಿನವು ದಿನವು ನೋಡಿ ನಲಿದಂಥ
ಮನವು ಒಂದು ಕ್ಷಣವು
ನೋಡದೆ ನಿಲ್ಲದು ನಿಲ್ಲದೆ ಸಾಗದು ||ಬಿ||

ಏಕೆ ಇಂದು ಹೀಗಾಯ್ತೋ
ನಾ ಕಾಣೆ ಸವತಿ ಕಾಟ
ಕರ್ಮ, ಬಂದಲೇ ಮಾಟಗಾತಿ ||ಬಿ||

ಮುಸ್ಸಂಜೆ ಹೊತ್ತು ಆರು ಮೂವತ್ತು
ಆಗಿತ್ತು ಬೆಳದಿಂಗಳ ಚಲ್ಲಿದ
ಒಲಿದನವನ ಮರೆಯೊದುಂಟೆ ||ಬಿ||

ನಮ್ಮಿಬ್ಬರ ನೋಟ ಒಂದು
ಎದೆಯಾಳದ ಮಾತು ಒಂದು
ಮೌನದ ಬವಣೆ ನೂರೆಂಟು ||ಬಿ||

ಯಾರದೋ ದೃಷ್ಟಿ ತಗುಲಿತೋ
ಪ್ರೀತಿಯ ಕನಸಿದು ಒಡೆಯಿತು
ಬಾಳೆಲ್ಲಾ ಬರಿದಾದ ಮರುಭೂಮಿ ||ಬಿ||

ಕಪ್ಪು ಬಿಳುಪು ನೀಲ ಕೆಂಪು
ಬಣ್ಣ ಒಡನಾಟ ಚೆಲ್ಲಾಟ
ಎಂತು ಕೇಳುವುದೇ ನನ್ನ ಗೀತೆ ||ಬಿ||

ಕಳಿಸಿರುವೆ ಪ್ರೇಮ ಸಂದೇಶ
ತಿಳಿಯುವುದೇ ನನ್ನದೆ ಅಳಲು
ಹಸಿರಾಗಿಹ ಪ್ರೇಮದ ಹೊನಲು ||ಬಿ||

ಇರುಳು ಹಗಲು ಕಳೆದು
ಬಿನ್ನಾಣಗಿತ್ತಿಯ ತೊರೆದು
ಒಲಿದ ಗೂಡಿಗೆ ಬಂದು ಸೇರೆನ್ನಾ
ಜೊತೆಯಾಗಿ ಹಾಡುವ ಬಾಳಗೀತೆ ||ಬಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನೆಗೆ ನನ್ನ ಮಾತು
Next post ಹಳ್ಳಿ ರಾಜಕೀಯ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

cheap jordans|wholesale air max|wholesale jordans|wholesale jewelry|wholesale jerseys